ಪ್ರದೀಪ್ ನಾರಾಯಣ್
ಮಂಗಳವಾರ, ಫೆಬ್ರವರಿ 22, 2011
ನಮ್ಮ ನಾಯಕರು
ನಮ್ಮ ನಾಯಕರು
ಹೀಗೆ ಕೆಲವು ಜನರಿರುತ್ತಾರೆ
ಮಾತೆತ್ತಿದರೆ ಸಮಾಜ ಸುಧಾರಣೆಯ ಮಾತನಾಡುತ್ತಾರೆ
ಸರ್ವ ಸಮಾನತೆ ಸ್ವಾತಂತ್ರ್ಯಗಳ ಘೋಷ ಮೊಳಗಿಸುತ್ತಾರೆ
ಅತೀ ಸಾಮಾನ್ಯನಲ್ಲಿ ನಾ ಸಾಮಾನ್ಯನಾಗಿ
ಬೆರೆಯುವೆನೆಂದು ಬಡಾಯಿ ಕೊಚ್ಚುತ್ತಾರೆ
ಇಡೀ ವ್ಯವಸ್ಥೆಯನ್ನ ಒಮ್ಮೆಲೆ ನಿಂತು ಸಾರ ಸಗಟಾಗಿ ಹೀಗಳೆಯುತ್ತಾರೆ ರಾಜಕೀಯ ರಾಜಕಾರಿಣಿಗಳ ಮಾನ ಕಳೆಯುತ್ತಾರೆ
ಅವರೆಂದರೆ ಆಧುನಿಕ ಹಿಟ್ಲರನ ಪ್ರತಿರೂಪವೆನ್ನುತ್ತಾರೆ
ರಾಜಕಾರಿಣಿಗಳ ಅಧಿಕಾರ ದಾಹವ ಎತ್ತಿ ತೋರಿಸುತ್ತಾರೆ
ಅವರು ದೇಶವನ್ನೇ ಕೊಳ್ಳೆ ಹೊಡೆವ ಖಳನಾಯಕರೆನ್ನುತ್ತಾರೆ
ದಬ್ಬಾಳಿಕೆ ದೌರ್ಜನ್ಯಗಳಿಗೆ ಮತ್ತೊಂದು ಹೆಸರೆನ್ನುತ್ತಾರೆ
ಇದು ಪ್ರಜಾಪ್ರಭುತ್ವ ಇಲ್ಲಿ ಎಲ್ಲರು ಸಮಾನರೆನ್ನುತ್ತಾರೆ
ಆದರೆ..........!!!!!?
ಅವರೂ ಸಹ ನಾನು ನಾಯಕನಾಗಬೇಕೆನ್ನುತ್ತಾರೆ
ಬದಲಾವಣೆ ನನ್ನಿಂದಲೇ ಆಗಬೇಕೆನ್ನುತ್ತಾರೆ
ನಾ ಹೇಳಿದಂತೆ ಹಿಂಬಾಲಕರು ಕೇಳಲಿ ಎನ್ನುತ್ತಾರೆ
ಅವರನ್ನೊಗಳುವ ಭಟ್ಟಂಗಿಗಳನ್ನು ಆಪ್ತರನ್ನಾಗಿಸಿಕೊಳ್ಳುತ್ತಾರೆ
ಅವರ ಜಯಘೋಷಗಳನ್ನು ಇನ್ನಿಲ್ಲದಂತೆ ಇಷ್ಟಪಡುತ್ತಾರೆ
ಸಣ್ಣದೊಂದು ತಪ್ಪನ್ನು ಬೇರಾರಾದರು ಎತ್ತಿ ತೋರಿಸಿದ್ದಾದರೆ
ಇನ್ನಿಲ್ಲದಂತೆ ಎಗರಿ ಚಡಪಡಿಸುತ್ತಾರೆ
ತಪ್ಪು ಅವರದೆಂದು ತಿಳಿದ ತಕ್ಷಣ ಜಾಣ್ಮೆಯ ಮೌನ ಮೆರೆಯುತ್ತಾರೆ
ಅವರ ಅನುಯಾಯಿಗಳಿಗೆ ಅವರದ್ದೇ ಆದ ಚೌಕಟ್ಟಾಕುತ್ತಾರೆ
ಅವರೆಲ್ಲ ನಿರ್ಧಾರಗಳಿಗೆ ಪರಕಾಯ ಪ್ರವೇಶಿಸುತ್ತಾರೆ
ನಾಯಕರಾಗುತ್ತಾರೆ ಸಂಘಟನೆಯ ಹೆಸರಿನಲ್ಲಿ ಸಂಘಟಿತರಾಗುತ್ತಾರೆ ಮತ್ತದೇ ಹಳೆಯ ನಾಯಕರಂತೆ ದಬ್ಬಾಳಿಕೆ ಮೆರೆಯುತ್ತಾರೆ
ಇವರು ನಮ್ಮಗಳ ನಡುವಿನ ಸಮಾನತೆಯ ಪ್ರತಿಪಾದಕರು
ಸುಧಾರಣೆಯ ಮಾತನ್ನಾಡುತ್ತಾರೆ..........
ಶಶಿಭಾಗ್ಯಜ
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ
ನವೀನ ಪೋಸ್ಟ್
ಹಳೆಯ ಪೋಸ್ಟ್
ಮುಖಪುಟ
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ