ಪ್ರದೀಪ್ ನಾರಾಯಣ್
ಶುಕ್ರವಾರ, ಏಪ್ರಿಲ್ 15, 2011
ಸುಖವಾಗಿರಲಿ ನನ್ನೊಲವು...
ಸುಖವಾಗಿರಲಿ ನನ್ನೊಲವು..
.
ಒಲವ ಸುತ್ತ ಸುತ್ತಿಕೊಂಡಿದ್ದ
ಸುರುಳಿ ಇದೀಗ ಬಿಚ್ಚಿಕೊಳ್ಳುತಿದೆ
ಮನದೊಳ
ಗೆಲ್ಲ ಬರೀ ಅದೇ ಸುದ್ದಿ
ಒಂದು
ಕ್ಷಣ ಏಕಾಂತವಾದರು
ತಂತಾನೇ ಎದೆ ಝಲ್ ಎನ್ನುತ್ತದೆ
ಹೊತ್ತು ಕಳೆದಂತೆಲ್ಲ ಆತಂಕ ಹೆಚ್ಚಾಗುತ್ತಿದೆ
ನಾ ಮಾರ್ಧನಿಸದೆ ಅಳುತ್ತಿರುವ ಸದ್ದು
ನನ್ನವಳ ಕರ್ಣವ ಇನ್ನೂ ತಾಕಲಿಲ್ಲವೇನೋ
ತಾಕಿದರು ತಾನೆ ಅವಳಾದರು ಏನ ಮಾಡಾಳು
ಬಿಡುವಿಲ್ಲ ಈಗವಳಿಗೆ ಯಾವುದನ್ನೂ ನೆನೆಸಿಕೊಳ್ಳಲು
ನಿದ್ರೆಯಲ್ಲೂ ನಗುವೆಂಬುದು ಮರೆತೋಗಿದೆ ನನಗೆ
ಅಟ್ಟಹಾಸಗೈಯ್ಯುತ್ತಿವೆ ರಾಕ್ಷಸೀ ಮನಸ್ಥಿತಿಗಳು
ಪ್ರೇಮಕ್ಕೆ ಬೆಟ್ಟದಂತೆ ಅಚಲ ಅಡ್ಡವಾಗಿದ್ದವರೆಲ್ಲ
ಇಂದು ಸಮುದ್ರದಂತೆ ಚಲನೆ ತೆಗೆದುಕೊಂಡಿದ್ದಾರೆ
ನನ್ನೊಲವ ಹಡಗ ಮುಳುಗಿಸಲು
ಎತ್ತ ಸಾಗಿದರತ್ತ ನೀರ್ಗಡ್ಡೆಗಳಾಗಿ ನಿಂತಿದ್ದಾರೆ
ಸುಖವಾಗಿರಲಿ ನನ್ನೊಲವು ನಾಳೆ ಹಸೆ ಏರಿದ ನಂತರ
ನಾನವಳ ಮರೆಯುವುದಿಲ್ಲ
ಮರೆತು ಮಂದಹಾಸಗೈಯುವುದಿಲ್ಲ
ಅವಳ ಹೆಸರ
ಲ್ಲಿ ಕವಿತೆ ಕಟ್ಟುತ್ತೇನೆ,
ನನ್ನೊಳಗಿನ ಕನವರಿಕೆಗಳಿಗೆ ಜೀವ ನೀಡುತ್ತೇನೆ
ಮರೆಯಾದ ನನ್ನೊಲವ ಸೇರಲು ದಾರಿ ಹುಡುಕುತ್ತೇನೆ
ಮರುಜನ್ಮದಲ್ಲಿಯಾದರು ಸರಿ
ಒಲವ ಉಳಿಸಿಕೊಡೆಂದು ಒಲವನ್ನೊಮ್ಮೆ ಪ್ರಾರ್ಥಿಸುತ್ತೇನೆ
- ಶಶಿಭಾಗ್ಯಜ ...
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ
ನವೀನ ಪೋಸ್ಟ್
ಹಳೆಯ ಪೋಸ್ಟ್
ಮುಖಪುಟ
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ